ನುಡಿದಂತೆ ನಡೆದವನ ಅಡಿಗೆನ್ನ ನಮನ
ಕತ್ತಲಲಿ ಬೆಳಕಿತ್ತ ನಿನಗೆನ್ನ ನಮನ

ಪರದಾಸ್ಯ ಮುಸುಕಿರಲು ಪರತತ್ವ ತುಂಬಿರಲು
ಸ್ವಾಭಿಮಾನದ ಜ್ವಾಲೆ ಪ್ರಜ್ವಲಿಸಿ ಬೆಳಗಿಸಿದೆ
ಬರಿದಾದ ಭಾವಗಳ ಒಡೆದೊಡೆದ ಹೃದಯಗಳ
ಒಂದೆಡೆಗೆ ಬೆಸಹೊಯ್ದು ದುರ್ಭೇದ್ಯ ನಿರ್ಮಿಸಿದೆ

ಬಡತನದ ಬೇಗೆಯಲಿ ಬರಿದಾದ ಸಿರಿತನದಿ
ಹಾಲಾಹಲವ ಕುಡಿದು ಅಮೃತವ ಸುರಿಸಿರುವೆ
ಹಗಲಿರುಳು ಇಲ್ಲದೆಯೇ ನಿಃಸವಾರ್ಥ ಸೇವೆಯಲಿ
ಮೈ ಮನವ ದಂಡಿಸುತ ಆದರ್ಶ ಬೆಳೆಸಿರುವೆ

ಬಹುಜನಕೆ ನೀ ತಿಳಿಯೆ ತಿಳಿದವಗೆ ನೀನೊಲಿವೆ
ಅವರೆಲ್ಲ ಹೃದಯಗಳ ದೇಗುಲದಿ ರಾಜಿಸುವೆ
ದೇಶಪ್ರೇಮವನೆರೆದು ಧ್ಯೇಯನಿಷ್ಠೆಯ ಬೆಳೆದು
ಆ ತಾಯಿ ಭಾರತಿಯ ವರಪುತ್ರ ನೀನಾದೆ

Leave a Reply

Your email address will not be published. Required fields are marked *