ಸೇವೆಯ ಸೇತುವೆ ಕಟ್ಟಲು ಬನ್ನಿ
ವ್ಯಕ್ತಿ ಸಮಾಜದ ನಡುವೆ
ನಾಡದೇವತೆಗೆ ಅರ್ಪಿಸ ಬನ್ನಿ
ತನುಮನದನದ ವಡವೆ || ಪ ||

ಸೇವೆಯೆ ತತ್ವದ ಸಾರವು ನಿಜದಿ ಸೇವೆಯೆ ಜೀವನ ಧರ್ಮ
ಸ್ವಾರ್ಥ ದುರಾಸೆಯ ನೀಗಿಸಿ ಬಾಳನು ಸಾರ್ಥಕಗೊಳಿಸುವ ಮರ್ಮ
ಕಂಗೆಡಿಸುವ ಕಗ್ಗತ್ತಲ ಕೂಪದಿ ಸೇವೆಯೆ ದಾರಿ ದೀಪ
ದುಃಖಿತ ಜನಗಳ ಕಂಬನಿ ಒರೆಸುವ ಕರುಣೆಯ ಮಾತೃ ಸ್ವರೂಪ || ೧ ||

ಅಕ್ಷರ ವಿದ್ಯೆಯ ಕಲಿಸಿ ನಿರಕ್ಷರ ಕುಕ್ಷಿಗಳಿಗೆ ಒಲವಿಂದ
ಅಕ್ಷಯ ರಕ್ಷಣೆ ನೀಡುತ ಶೋಷಿತ ಜನತೆಗೆ ಛಲಬಲದಿಂದ
ಕಾರ್ಪಣ್ಯದ ಘಟಸರ್ಪದ ದರ್ಪವ ಮುರಿಯಲು ಸೇವೆಯ ಮಾರ್ಗ
ತ್ಯಾಗ ಸಮರ್ಪಣ ಭಾವದಿ ದುಡಿದರೆ ಧರೆಯಿದು ಆಗದೆ ಸ್ವರ್ಗ || ೨ ||

ಮನೆಮನೆಯಾಗಲಿ ಸೇವಧಾಮ ಚಿರವಾತ್ಯಲದ ಸೆಲೆಯು
ನೋವಲಿ ನರಳಿಹ ಹತಭಾಗ್ಯರಿಗೆ ನಲಿವನು ನೀಡುವ ನೆಲೆಯು
ಅಸ್ಪೃಶ್ಯತೆ ಅನ್ಯಾಯವನಳಿಸಲು ಗೈಯ್ಯುವ ದೃಢ ಸಂಕಲ್ಪ
ಭಾರತ ಮಾತೆಯ ಆರಾಧನೆಗೆ ಅರ್ಪಿಸಿ ಜೀವನ ಪುಷ್ಪ || ೩ ||

Leave a Reply

Your email address will not be published. Required fields are marked *